suddiduniya.com

Ganiga Samaja : ಸಮಾಜ ತಾಯಿ ಇದ್ದಂತೆ ಗೌರವ ನೀಡುವ ಕೆಲಸವಾಗಲಿ

Ganiga samaja

ಲಿಂಗಸುಗೂರು : ನಮ್ಮ ಸಮಾಜ ನಮಗೆ ತಾಯಿ ಇದ್ದಂತೆ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಸಮಾಜದ ಋಣ ತೀರಿಸುವ ಪ್ರತಿಯೊಬ್ಬರು ಮಾಡಬೇಕು ಎಂದು ಕೆಪಿಸಿಸಿ ಸದಸ್ಯ ಅಮರಗುಂಡಪ್ಪ ಮೇಟಿ ಕರೆ ನೀಡಿದರು.

Ganiga samaja
Ganiga Samaja

ಪಟ್ಟಣದ ಐಎಂಎ ಸಭಾಂಗಣದಲ್ಲಿ ತಾಲೂಕು ಗಾಣಿಗ ಸಮಾಜ ಸಂಘ, (Ganiga Samaja )ನೌಕರರ, ಮಹಿಳಾ ಹಾಗೂ ಯುವ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗಾಣಿಗ ಸಮಾಜಕ್ಕೆ ತನ್ನೇದ ಆದ ಇತಿಹಾಸ ಇದೆ. ಸಮಾಜ ನಮಗೆ ಏನು ನೀಡಿದೆ ಎನ್ನುವುದಕ್ಕಿಂತ ನಾನು ಸಮಾಜಕ್ಕೆ ಏನು ಕೊಡುಗೆ ನೀಡಿದೆ ಎನ್ನುವುದು ಮುಖ್ಯವಾಗಿದೆ. ಸ್ಪರ್ದಾತ್ಮಕ ಯುಗದಲ್ಲಿ ಕಠಿಣ ಪ್ರಯತ್ನ ಮಾಡಿ ಉತ್ತಮ ಸಾಧನೆ ಮಾಡಿದರೆ ಸಮಾಜ ತಾನೇ ತಮ್ಮನ್ನು ಗುರುತಿಸಿ ಗೌರವಿಸುತ್ತದೆ ಎನ್ನುವುದಕ್ಕೆ ಇಂದು ನಡೆಯುತ್ತಿರುವ ಪ್ರತಿಭಾ ಪುರಸ್ಕಾರವೇ ಸಾಕ್ಷಿಯಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಇಂದು ಸನ್ಮಾನಿಸುತ್ತಿರುವುದು ಪ್ರತಿಭೆಗೆ ಸಿಕ್ಕ ಗೌರವಾಗಿದೆ ಎಂದರು. ಸಮಾಜದ ಮಹಿಳಾ ಘಟಕದ ಪದಾಧಿಕಾರಿಗಳು ಒಗ್ಗೂಡಿ ಸ್ವ ಸಹಾಯ ಸಂಘ ರಚಿಸಿಕೊಂಡು ಹಣಕೂಡಿಟ್ಟು ಸಂಘದ ಸದಸ್ಯರಿಗೆ ಆರ್ಥಿಕ ನೆರವು ನೀಡುವ ಮೂಲಕ ಆರ್ಥಿಕ ಸಬಲರಾಗಿದ್ದಾರೆ. ಅದೇ ರೀತಿ ಕಳೆದ ಎರಡು ವರ್ಷಗಳ ಹಿಂದೆ ವನಶ್ರೀ ಸಹಕಾರಿ ಸಂಘ ಸ್ಥಾಪಿಸಿ 10 ಕೋಟಿ ವಹಿವಾಟು ನಡೆಸಿದೆ ಇದಕ್ಕೆಲ್ಲಾ ಸಮಾಜದವರ ಸಹಕಾರವೇ ಕಾರಣವಾಗಿದೆ. ಸಮಾಜದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.

Ganiga Samaja

ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಗುರುವಿಲ್ಲದೆ ಬದುಕು ಇಲ್ಲ, ಈಗಾಗಿ ಗುರುವಿನ ಅನುಗ್ರಹ ಹಾಗೂ ಕಠಿಣ ಶ್ರಮದಿಂದ ಉತ್ತಮ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಗೌರವಿಸುವ ಕೆಲಸ ಶಾಘ್ಲನೀಯವಾಗಿದ್ದು,  ಮಕ್ಕಳಿಗೆ ಮೌಲ್ಯಯುತ ಶಿಕ್ಷ ಣ ದೊರಕಬೇಕು. ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸಬೇಕು ಆಗ ಮಾತ್ರ ಸಮಾಜದಲ್ಲಿ ಗೌರವ, ಮಾನ್ಯತೆ ದೊರಕಲಿದೆ ಎಂದರು. ಯುವಜನತೆ ಸಮಾಜ ಕಟ್ಟುವ ಕೆಲಸಕ್ಕೆ ಮುಂದಾಗಬೇಕು. ದೂರದೃಷ್ಟಿ, ಗುರಿ ಹೊಂದುವ ಮೂಲಕ ಜಗತ್ತಿನ ಎಲ್ಲ ಸಮಾಜದವರೊಂದಿಗೆ ಬೆರೆತು ಕೆಲಸ ಮಾಡುವ ಉದ್ದೇಶ ಹೊಂದಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು.

Ganiga Samaja

ಸಮಾರಂಭದಲ್ಲಿ ವನಶ್ರೀ ಸಹಕಾರಿ ಸಂಘದ ಅಧ್ಯಕ್ಷ ಸಂಗಣ್ಣ ಹೊಸೂರು, ಉಪಾಧ್ಯಕ್ಷ ಶರಣಬಸವ ಸಜ್ಜನ್, ದೈಹಿಕ ಶಿಕ್ಷಣ ಪರಿವೀಕ್ಷಕ ಚೆನ್ನಬಸವರಾಜ ಮೇಟಿ, ಮುಖಂಡರಾದ ಹಳ್ಳೇರಾವ್ ದೇಸಾಯಿ, ಮಹಾಲಿಂಗಪ್ಪ ವಕೀಲರು, ನೌಕರರ ಸಂಘದ ಅಧ್ಯಕ್ಷ ಶಶಿಕಾಂತರಾವ್ ದೇಸಾಯಿ, ಗೌರವಾಧ್ಯಕ್ಷ ಅಮರೇಗೌಡ ಅಗಸಿಮಂದಿನ, ಕಾರ್ಯದರ್ಶಿ ರಮೇಶ ಸಾಲಗುಂದಿ, ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ವಿರೇಶ ಶಿರಸಂಗಿ, ಪ್ರೌಢಶಾಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷ ಶರಣಗೌಡ ಅಗಸಿಮಂದಿನ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ಸಜ್ಜನ್, ಯುವ ಘಟಕದ ಅಧ್ಯಕ್ಷ ಬಸವರಾಜ ಯಲಗಲದಿನ್ನಿ ಸೇರಿದಂತೆ ಅನೇಕರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!